Friday, October 12, 2007

ವೋ ಬರಸಾತ್ ಕೀ ರಾತ್........

ಹೊರಗೆ ಸುರಿಯುವ ಮಳೆ, ನಸುಗತ್ತಲು, ಮುಖೇಶ್ ನ ಧರ್ದ್ ಬರೀ ಕಂಠದಿಂದ ಭೂಲೀ ಹುಯಿ ಯಾದೋ ಮುಝೆ ಇತನಾ ನ ಸತಾವೋ.....ಕಿಟಕಿಯ ಸರಳಿನ ಮೂಲಕ ಹನಿಗಣನ್ನೆಣಿಸುತ್ತಿರುವ ನಾನು...........

ಯಾವತ್ತಾದರೋ ಜೋರಾಗಿ ಸುರಿವ ಮಳೆ ನೋಡುತ್ತಾ ನಿಮ್ಮ ಇಷ್ಟದ ಹಾಡು ಕೇಳುತ್ತಾ, ಒಂಟಿಯಾಗಿ ಕಾಲ ಕಳೆದಿದ್ದೀರಾ? ಹಾಗಿದ್ದರೆ ಮಳೆ ಕಟ್ಟಿಕೊಡುವ ಭಾವನಾ ಪ್ರಪಂಚದ ಪರಿಚಯ ನಿಮಗಿರಲೇ ಬೇಕು.
ಆದರೂ, , ಮಳೆಗಿರುವ ನೆನಪುಗಳನ್ನು ಬಡಿದೆಬ್ಬಿಸುವ ಅಗಾಧ ಶಕ್ತಿಯ ಅರಿವಾಗಬೇಕೆಂದರೆ ಮಲೆನಾಡಿನ ಯಾವುದಾದರೋ ಹಳ್ಳಿಯಲ್ಲಿ ಮಳೆಗಾಲದ ಒಂದು ರಾತ್ರಿಯನ್ನು ಕಳೆಯಬೇಕು
ಸೂರ್ಯ ಮುಳುಗುತ್ತಿದ್ದಂತೆ ತೆಪ್ಪಗಾಗುವ ಈ ಹಳ್ಳಿಗಳಲ್ಲಿ ಜೋರಾಗಿ ಮಳೆ ಸುರಿದು ಕರೆಂಟ್ ಕೈಕೊಟ್ಟರೆ ಕೇಳುವುದೇ ಬೇಡ. ಜೀಗುಟ್ಚುವ ಕತ್ತಲಲ್ಲಿ ನಿಶಬ್ವವೇ ಮೂಖವಾದಂತಹ ಮೌನ. ಧೋ ಎಂದು ಸುರಿಯುವ ಮಳೆಯ ಸದ್ದು ಕೂಡ ತನ್ನ ಏಕತಾನತೆಯಿಂದಾಗಿ ಅ ಮೌನವನ್ನು ಮತ್ತಷ್ಟು ಹೆಪ್ಪುಗಟ್ಟಿಸುತ್ತದೆ. ಕಣ್ಣು ಹಾಯಿಸಿದಷ್ಚು ಉದ್ದಕ್ಕೂ ಕಾಣುವ ಅದೇ ನೋಟ. ನೋಡುತ್ತಾ ನಿಂತರೆ ನೆನಪುಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ,

ಉಣ್ಣದೆ ಮಲಗಿದವರನ್ನು ಎಬ್ಬಿಸಿ ಅಮ್ಮ ಬಲವಂತವಾಗಿ ಊಟ ಮಾಡಿಸಿದ್ದು, 25 ಪೈಸೆ ಕದ್ದಿದ್ದಕ್ಕೆ ಅಪ್ಪ ಹೊಡೆದಿದ್ದು, ಶಾಲೆಯಲ್ಲಿ ಕೊಟ್ಟ ಪುಟ್ಟ ಸ್ಟೀಲ್ ಲೋಟದ ಬಹುಮಾನವನ್ನು ಅಪ್ಪ ಹೆಮ್ಮೆಯಿಂದ ಎಲ್ಲರಿಗೂ ತೋರಿಸಿದ್ದು. ಫ್ರಿಲ್ಸ್ ಇರುವ ಫ್ರಾಕ್ ತೊಡುವ ಕನಸು ಕನಸಾಗಿಯೇ ಉಳಿದದ್ದು, ತಮ್ಮನಿಗೆ ಬರೀ ಸುಳ್ಳು ಕಥೆ ಕಟ್ಟಿ ಹೇಳಿ ನಂಬಿಸಿದ್ದು, ಅದೇ ಪುಟ್ಟ ತಮ್ಮ ಕಡಿಮೆ ಮಾರ್ಕ್ಸ್ ತಗೊಂಡು ಅಳುತ್ತಿದ್ದ ನನ್ನ ಕಣ್ಣೊರೆಸಿದ್ದು, ಎರಡು ವರ್ಷ ನಿರಂತರವಾಗಿ ಕಾಲೇಜಿನವರೆಗೂ ಹಿಂಬಾಲಿಸಿದ ಹುಡುಗ ಕೊನೆವರೆಗೂ ಮೌನವಾಗಿಯೇ ಉಳಿದು ಮರೆಯಾದದ್ದು, ಹೈಸ್ಕೂಲ್ ಪ್ರೇಮಕ್ಕೆ ಇನ್ಫ್ಯಾಚುಯೇಶನ್ ಎಂಬ ಹೆಸರಿಟ್ಟು ಬದುಕು ಗುರಿ ತಪ್ಪದಂತೆ ಕಾದಿದ್ದು......ಹೀಗೇ ಏನೇನೋ ಒಂದಕ್ಕೊಂದು ಸಂಬಂಧವಿಲ್ಲದ ನೆನಪುಗಳ ಸರಮಾಲೆ.. ಸುರಿಯುತ್ತಿರುವ ಮಳೆಯಿಂದಾಗಿ ಮನದಲ್ಲಡಗಿರುವ ನೆನಪುಗಳೆಲ್ಲಾ ಒದ್ದೆಯಾಗಿ ಒಂದಕ್ಕೊಂದು ಅಂಟಿಕೊಂಡು ಬಿಡಿಸಲಾಗದೆ, ಕಲಸುಮೇಲೊಗರವಾದ ರೀತಿ...

ಈ ಯಾವ ನೆನಪುಗಳೂ ಮನಸ್ಸಿಗೆ ಎಂದಿಗೂ ಸಂತಸ ತಂದ್ದಿಲ್ಲ ..ಅಂತರ್ಮುಖಿಯಾಗಿಸುತ್ತದೆ. ಆದರೂ ಮತ್ತೆ ಮತ್ತೆ ಮಳೆ ನೋಡುತ್ತಾ ನೆನಪುಗಳ ಧೂಳು ಕೊಡಹುವ ಬಯಕೆ..ಗಾಯವನ್ನು ಮತ್ತೆ ಮತ್ತೆ ಮುಟ್ಟಿಕೊಂಡು ನೋವು ಅನುಭವಿಸುವಂತೆ ..ಎಂತಹದ್ದೋ ಅನುಭವಿಸುವ ಚಟ ಹತ್ತಿಸುವಂತಹ ಸಣ್ಣ ನೋವು....ಅದಕ್ಕೆ ನನಗನ್ನಿಸುವುದು ಮಳೆಯೆಂದರ ಮ್ಲಾನತೆ.......ಖಿನ್ನತೆ.....ನೆನಪುಗಳ ಯಾತನೆ.

4 comments:

ವಿ.ರಾ.ಹೆ. said...

wonderful. 2 tingala break nantara susvagata. :)

ಅನಿಕೇತನ said...

ಓದುವಾಗ ನನ್ನದೆ ಬ್ಲಾಗನಲ್ಲಿ ಇದ್ದ ಅನುಭವ ಆಯ್ತು. ನನ್ನ ಮನಸ್ಸಿನಲ್ಲಿ ಇದ್ದ ವಿಚಾರವನ್ನೆ ಇಲ್ಲಿ ಬರೆದಿದ್ದಿರಾ... ನಿಜಕ್ಕೂ ಚೆನ್ನಾಗಿದೆ.

Anonymous said...

Nieevu bareva reethi tumba tumba muddaagide..padagala jodane adbhutavaagide…

Nanna putaani blog

www.navilagari.wordpress.com

idakke nimma blaag rolnalli swalpa jaaga kodi:)

Nimma somu

Sridhar Raju said...

ನಮಸ್ಕಾರ

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಶ್ರೀಧರ